ಭುವಿಯೆಲ್ಲ ಗೆರೆಗಳು
ತಿರುಗುತ್ತಿಲ್ಲ ಹುಟ್ಟು ಸಾವುಗಳನು ಹೊತ್ತು
ಭಾರವಾದ ಉಸಿರು
ಇನ್ನೇನು ಮುಗಿದೇ ಹೋಯಿತೆನ್ನುವಷ್ಟರಲ್ಲಿ
ಕಣ್ಣುಗಳಲ್ಲೇ ಇಡೀ ಬೆಳಕನ್ನು ತುಂಬಿಕೊಂಡು
ನನ್ನೆಡೆಗೆ ನೋಡಿದ ಹೊಳಪು
ಹೇಗೋ ನೆರಳುಗಳ ಸೀಳಿಕೊಂಡು
ನನ್ನಲ್ಲೆಲ್ಲ ಪ್ರವಹಿಸಿ
ಪುಳಕ, ತೆನೆ ತೂಗಿದಂತೆ ಹಗುರ
ಚಲನೆ ಶುರುವಾಯಿತು
ನೆಲಬೇರುಗಳಿಗೆ ಮತ್ತೆ ಚಿಗುರು.
(ಮಂಜುನಾಥ.ಎಸ್)
Friday, 29 January 2010
Saturday, 23 January 2010
Thursday, 21 January 2010
ಪ್ರೀತಿಯ ನಿವೇದಿಸಿಕೊಂಡಾಗ
ತೇವಗೊಂಡ ಕಣ್ಗಳಿಂದ
ಜಾರುತಿರುವ ಹನಿಗಳ ರಭಸಕೆ
ಕೊಚ್ಚಿಹೋದ ನೂರೆಂಟು ಭಾವನೆಗಳು
ನಿವೇದಿಸಿಕೊಂಡ ಪ್ರೀತಿಯನು
ಹೃದಯದಲ್ಲಿಟ್ಟು ಕೊಳ್ಳಲೆತ್ನಿಸಿದರು
ಎದುಸಿರು ಬಂದು ಹೊರದಬ್ಬಿಹೇಳುತಿದೆ
ಇಲ್ಲಿ ಗಾಳಿಗೂ ಜಾಗವಿಲ್ಲವೆಂದು
ಹೊರದಬ್ಬಿದ ರಭಸಕೆ
ಘಾಸಿಗೊಂಡ ಮನಸ್ಸು
ಹುಚ್ಚೆದ್ದು ಓಡುವಂತೆ ಹೃದಯದ ಬಡಿತ ಹೆಚ್ಚಾಗಿ
ಮುಚ್ಚಲೆತ್ನಿಸುತಿರುವ ಕಣ್ ರಪ್ಪೆಗಳು
ಏನೂ ಹೇಳಲು ಹೊರಟ
ತುಟಿಗಳು ಅದುರಿ ಜಡಗೊಂಡಿದೆ
ನನ್ನ ಸನಿಹದಲೇ ಸುಳಿಯುತ್ತಿರುವ
ನಿನ್ನ ಕೊನೆಯುಸಿರು ಸೇರಿ
ತಲ್ಲಣಿಸುತಿದೆ
Wednesday, 13 January 2010
ನೀರೆ .....

ಮೌನಕೆ ಶರಣಾಗಿ
ಪ್ರೀತಿಯನ್ನು ಹುದಿಗಿಸಬೇಡ
ನಿನ್ನೆಯ ಬಡತನ ಶೂಲೆಯ
ನೀಗಿಸಲು ಹೊರಟು
ಸಿರಿವಂತರ ಸುಂಟರಗಾಳಿಗೆ ಸಿಕ್ಕು
ಬಾಡಿಹೋದ ಬದುಕಲಿ
ಚಿಗುರೊಡೆದ ಪ್ರೀತಿಯನು
ಚಿವುಟ ಬೇಡ
ಕ್ಷೀಣಿಸಿದ ದೇಹವನು
ಚಲ್ಲಾಪಿಲ್ಲಿಯಾದ ಬದುಕನು
ಕಟ್ಟುವ ಚಿತ್ತದ ಮುಂದೆ
ನನ್ನ ಕಣ್ಣ ಹನಿಯು ಬೇಡುತಿದೆ
ನಿನ್ನ ದೇಹವನು ಅಪರಿಚಿತರೊಡನೆ
ಹಂಚಿಕೊಂಡಿದ್ದರೇನು
ಮನಸ್ಸು ಪವಿತ್ರವಾಗಿದೆ
Subscribe to:
Posts (Atom)