Monday 8 March, 2010

ಒಡೆದ ಮುತ್ತನು ಸುರಿದು

ಮಾತು ಮಾತಿಗೆ ಪೋಣಿಸಲು

ಹುರಿದುಂಬಿದ ಮನೆಯಲಿ

ಹನಿ ನೀರಿಗೂ ಬರಗಾಲ

ಕರಿಮಣಿಯ ಕಿತ್ತೊಗೆದ ಮಧುಮಗಳ ಬಾಳು

ಎಣ್ಣೆ ಇಲ್ಲದ ದೀಪವು ಬರ ಬರನೆ ಉರಿದು

ಮನಸ್ಸಿಲ್ಲ ಮಂಚದಲಿ ಮಲ್ಲಿಗೆಯ ಹಾಸಿ

ಕರಗುವ ಮುತ್ತು ಒಂದೆಡೆ ಸೇರಿ

ಕಣ್ಣಂಚಿನ ಕಾಡಿಗೆಗೆ ಧಗಧಗಿಸಿ

ತನ್ನಾವರಿಸಿದ ಸೆಳೆಯು ಮೊನಚುಗೊಂಡು

ಊರ ಸುತ್ತಲೊರಟ ಮನವು ಹಿಂತಿರುಗಿ ಬರುವುದೆಂದು

ಸೂರಿನಡಿ ನುಡಿಯುತಿದೆ ಶಕುನದ ಹಕ್ಕಿ

No comments: