
ಮೌನಕೆ ಶರಣಾಗಿ
ಪ್ರೀತಿಯನ್ನು ಹುದಿಗಿಸಬೇಡ
ನಿನ್ನೆಯ ಬಡತನ ಶೂಲೆಯ
ನೀಗಿಸಲು ಹೊರಟು
ಸಿರಿವಂತರ ಸುಂಟರಗಾಳಿಗೆ ಸಿಕ್ಕು
ಬಾಡಿಹೋದ ಬದುಕಲಿ
ಚಿಗುರೊಡೆದ ಪ್ರೀತಿಯನು
ಚಿವುಟ ಬೇಡ
ಕ್ಷೀಣಿಸಿದ ದೇಹವನು
ಚಲ್ಲಾಪಿಲ್ಲಿಯಾದ ಬದುಕನು
ಕಟ್ಟುವ ಚಿತ್ತದ ಮುಂದೆ
ನನ್ನ ಕಣ್ಣ ಹನಿಯು ಬೇಡುತಿದೆ
ನಿನ್ನ ದೇಹವನು ಅಪರಿಚಿತರೊಡನೆ
ಹಂಚಿಕೊಂಡಿದ್ದರೇನು
ಮನಸ್ಸು ಪವಿತ್ರವಾಗಿದೆ
No comments:
Post a Comment