ಗಂಜಲದಲಿ ಮನೆಯ
ತೊಳೆದು
ಬಾಗಿಲಂಗಳದಲಿ
ಸಗಣಿ ಎರಚಿ
ದೇವರ ಕೋಣೆಯಲಿ
ಬೆಣವಣ್ಣನಿಟ್ಟು
ಪೂಜಿಸಿದವಳು,
ಕೊಟ್ಟಿಗೆಯ ಸ್ವಚ್ಚಗೊಳಿಸಿ
ಬೆರಣಿಗೆ ಬೆಂಕಿಯಿಟ್ಟು ಬೆಚ್ಚಗಾದಳು
ಬಡತನದ ದೀವಿಗೆಯ ಹೊತ್ತು
ಕಾಮ ಕ್ರೋಧವನು ಕತ್ತಲೆಗೆ ದೂಡಿ
ಪೂಜೆ ಪುನಸ್ಕಾರವನು ಬದಿಗೊತ್ತಿ
ಬಿಸಿಲ ಧೂಳಲಿ ಕರೆ ಕಾಳ ಬಿತ್ತಲು
ಕುರಿಕೆಯ ಹಿಡಿದು ಹೊರಟ ಹಸಿ ಮೈ
ಜಡಿ ಮಳೆಗೆ ಬೆವರು ಸುರಿಸಿ,
ಮಣ್ಣೆಂಟೆ ಕಳೆಗಳನು ಬಡಿದು
ಬಡ ಬಗ್ಗರ ಬದುಕ ಕಟ್ಟಿ
ಮೊಳಕೆಯೊಡೆವ ಮೊದಲೆ
ತನ್ನಾಳುವ ಅರಸನ ಕೈಗೆ ಸಿಕ್ಕು
ಮೇಣಿಯ ಹಾಲನು ಕುಡಿದು
ನೇಗಿಲ ಯೋಗಿಯಾಗಿರುವೆ.
ಸುರುಟಿಕೊಂಡ ಪ್ರೀತಿ
ಕರಗಿದ ಮುತ್ತು
ಒಗ್ಗೂಡಿ
ಮರು ಹುಟ್ಟು.
ನೋವು ಹುದುಗಿಸಿಟ್ಟು
ಅವಳಿಗಾಗಿ ಕಾಯುವ ಕಾಲ
ನನ್ನ ಮುಂದೆ ನಶ್ವರ
ಅರಕಲು ಭೂಮಿಯ ಕೊರೆದು
ಅರೆ ಬರೆ ಅಕ್ಷರವ ಗೀಚುತ
ಮಾರುದ್ದ ಮಾಲೆಯ ತೂಗಿಕೊಂಡು
ಮಿರ ಮಿರ ಮಿಂಚುವ ಬಟ್ಟೆಯ ಧರಿಸಿ
ಸಾಧನೆಗಳೆಲ್ಲವು, ನಾನು ನನ್ನಿನ್ನೆಂದು,
ಪ್ರಶಸ್ತಿಯೆಂಬ ಹೊಲಸನು ಮುಡಿಗೇರಿಸಿ
ಓರೆ-ಕೋರೆಗಳನು ತಿದ್ದಲೊರಟು
ಪಾಪ ಪರಿವರ್ತನೆಯೆಂಬ
ಮೂಡನಂಬಿಕೆಗೆ ಸೆಣೆದು
ಪರಲೋಕ ಕಲ್ಯಾಣಕ್ಕಾಗಿ ಗದ್ದುಗೆಯೊಳಗಿಳಿದು
ಅಸ್ಪ್ರುಶ್ಯತೆಗೆ ಜನ್ಮ ನೀಡಿ
ಜಗವೆಲ್ಲ ನನ್ನದೆನ್ನುವವನ
ಬುದ್ದಿಯೊಳ ಬುದ್ದಿಯನು
ತಿದ್ದಿ ಬುದ್ದಿಯೇಳಲೋರಟವರು ಮೂರ್ಖರಲ್ಲ