Saturday, 31 July 2010

ಕೆಂಪು ಕುಂಚ

ನಿನ್ನ ದ್ಯೇಯಗಳ ನಿರ್ಣಯ

ಪರರ ಏಳಿಗೆಗೆ ಮೀಸಲಿರಿಸಿದೆ.

ಸರ್ವಧರ್ಮ

ಸಮಾಭಾವವೆಂದು ತಿಳಿದು

ನ್ಯಾಯ ವಿಚಾರ,

ಅಭಿವ್ಯಕ್ತಿ ನಂಬಿಕೆ ಇಟ್ಟು

ಊಟ, ಉಡುಪು, ಆಚಾರ,

ಭಾಷೆಗಳನ್ನು ಮೈಗೂಡಿಸಿಕೊಂಡು

ದೇಶವನು ಸುಭದ್ರಗೊಳಿಸಲೊರಡುವ

ಸಮಯಕೆ

ದೊರೆಯ ದಬ್ಬಾಳಿಕೆಗೆ ಸಿಲುಕಿ ಸೊರಗಿದೆ

ಹಸಿದು ಒಣಗಿದ ಜನರು ಕಾಯುತಿಹರು

ಏಳು, ಎದ್ದೇಳು

ನಿನ್ನ ಲೇಖನಿಯಲಿ ಶಿರವ ಚಂಡಾದಿ

ಹೋರಾಟದ ಹಾದಿಗೆ ಮುನ್ನುಡಿಯಿಡು.

Saturday, 24 July 2010

ತಣಿಸು ಜೀವಾತ್ಮವ


ಒಡಕು 
ಸನಿಹವಾದಾಗ 
ಮಾತು 
ಹೊರಹೊಮ್ಮಿ 
ಮನ್ನಿಸು ಎನ್ನುವಷ್ಟರಲ್ಲಿ 
ನನಗಾದ ನೋವು 
ನಿನ್ನದಲ್ಲವೆನ್ನುತ 
ಮರು ಮಾತಾಡದೆ 
ಬಾನಾಡಿಗಳ ದಣಿವಿನ ದಾಹವ ತೀರಿಸಿ 
ಮರೆಯಾದಳು

Saturday, 17 July 2010

ಪಟ್ಟ ಭದ್ರ

ಕುಂಟು ನೆಪದ ಮಿಡತೆ 

ಅಧಿಕಾರದ ಚುಕ್ಕಾಣಿ ಹಿಡಿದಾಗ

ಜೊಲ್ಲು ಸುರಿಸಿ ತೆವಳಿದ 

ಅಳ್ಳೆ ಗುಳ್ಳೆ ಬಸವ

ಸಾರಥಿಯ ಪದವಿ ಪಡೆದು

ಕಸ್ತೂರಿಗೆ ನೊಗವ ಕಟ್ಟಿ

ಊರೆಲ್ಲ ಸುತ್ತಿ ಮರಳುವ ಮುನ್ನ 

ಕತ್ತಲೆಯಲ್ಲಿ ಕಾಗೆಗೆ 

ಕೂಳು ಹಾಕಲಾಗಿತ್ತು.

Friday, 9 July 2010

ಕೆಡವಿ ತಾರತಮ್ಯವ

ಜಾತಿ ಮತದ

ವಿಷ ಬೀಜ

ಆಂತರ್ಯಕ್ಕೆ ಬಿತ್ತಿ

ರಾಜ್ಯ ಕಟ್ಟಿ

ಅರಸನಾಗಿ ಆಳಿದವನು

ಕೋಮು ಗಲಭೆಯ

ಕಳೆಯೊಳಗೆ ಸಿಲುಕಿ

ಕಾಲವಾದಾಗ

ಊರೂರ ಹಸಿರು ಸಿರಿಯಾಡುವುದು.