ನಿನ್ನ ದ್ಯೇಯಗಳ ನಿರ್ಣಯ
ಪರರ ಏಳಿಗೆಗೆ ಮೀಸಲಿರಿಸಿದೆ.
ಸರ್ವಧರ್ಮ
ಸಮಾಭಾವವೆಂದು ತಿಳಿದು
ನ್ಯಾಯ ವಿಚಾರ,
ಅಭಿವ್ಯಕ್ತಿ ನಂಬಿಕೆ ಇಟ್ಟು
ಊಟ, ಉಡುಪು, ಆಚಾರ,
ಭಾಷೆಗಳನ್ನು ಮೈಗೂಡಿಸಿಕೊಂಡು
ದೇಶವನು ಸುಭದ್ರಗೊಳಿಸಲೊರಡುವ
ಸಮಯಕೆ
ದೊರೆಯ ದಬ್ಬಾಳಿಕೆಗೆ ಸಿಲುಕಿ ಸೊರಗಿದೆ
ಹಸಿದು ಒಣಗಿದ ಜನರು ಕಾಯುತಿಹರು
ಏಳು, ಎದ್ದೇಳು
ನಿನ್ನ ಲೇಖನಿಯಲಿ ಶಿರವ ಚಂಡಾದಿ
ಹೋರಾಟದ ಹಾದಿಗೆ ಮುನ್ನುಡಿಯಿಡು.
Saturday 31 July, 2010
Saturday 24 July, 2010
ತಣಿಸು ಜೀವಾತ್ಮವ
ಸನಿಹವಾದಾಗ
ಮಾತು
ಹೊರಹೊಮ್ಮಿ
ಮನ್ನಿಸು ಎನ್ನುವಷ್ಟರಲ್ಲಿ
ನನಗಾದ ನೋವು
ನಿನ್ನದಲ್ಲವೆನ್ನುತ
ಮರು ಮಾತಾಡದೆ
ಬಾನಾಡಿಗಳ ದಣಿವಿನ ದಾಹವ ತೀರಿಸಿ
ಮರೆಯಾದಳು
Saturday 17 July, 2010
ಪಟ್ಟ ಭದ್ರ
Friday 9 July, 2010
ಕೆಡವಿ ತಾರತಮ್ಯವ
ಜಾತಿ ಮತದ
ವಿಷ ಬೀಜ
ಆಂತರ್ಯಕ್ಕೆ ಬಿತ್ತಿ
ರಾಜ್ಯ ಕಟ್ಟಿ
ಅರಸನಾಗಿ ಆಳಿದವನು
ಕೋಮು ಗಲಭೆಯ
ಕಳೆಯೊಳಗೆ ಸಿಲುಕಿ
ಕಾಲವಾದಾಗ
ಊರೂರ ಹಸಿರು ಸಿರಿಯಾಡುವುದು.
ವಿಷ ಬೀಜ
ಆಂತರ್ಯಕ್ಕೆ ಬಿತ್ತಿ
ರಾಜ್ಯ ಕಟ್ಟಿ
ಅರಸನಾಗಿ ಆಳಿದವನು
ಕೋಮು ಗಲಭೆಯ
ಕಳೆಯೊಳಗೆ ಸಿಲುಕಿ
ಕಾಲವಾದಾಗ
ಊರೂರ ಹಸಿರು ಸಿರಿಯಾಡುವುದು.
Subscribe to:
Posts (Atom)