Tuesday, 6 April 2010


ನನ್ನ ಯವ್ವನದ

ಪ್ರೇಮ ಪ್ರಸಂಗಗಳನ್ನು ಕವಿತೆಯಾಗಿ

ಬಣ್ಣಿಸಲು ಲೇಖನಿ ಹಿಡಿದಾಗ

ಎರಡನೆ ಸಾಲು ಮುಗಿಯುವ

ಮುನ್ನ

                                             ಲೇಖನಿಯ ಶಾಯಿ

                                             ತನ್ನ ಯವ್ವನವ ನೆನೆದು

                                             ಬರೆಯುವುದನ್ನೆ ಮರೆಯಿತು


ನೇಗಿಲ ಯೋಗಿಯು

ಇಡೀ ಸಮಾಜದ

ಹೊಲವ ಉತ್ತಾಗ

ಹಸಿರು ಬನದ ಚಿಗುರು

ಅಸ್ಪ್ರುಶ್ಯತೆ ಹೋಗಲಾಡಿಸಲು

ಪಣ ತೊಟ್ಟವು





ಚೀಕಳ್ಳಿಯ ಚೆಲುವೆ

ಬೇಲೂರ ಬೀದಿಯಲಿ

ಬಳುಕಿ, ಬಿಂಕದ ನಡಿಗೆಯಿಟ್ಟಾಗ

ಹಲ್ಕಿರಿದು ನಡೆದ 

ನಮ್ಮೂರ ಹೈದರ ಕಥೆ ಕೆತ್ತಲು 

ಬೆಟ್ಟ ಬೆಟ್ಟಗಳೇ ಕರಗಿ ಹೋದವು 

Monday, 8 March 2010

ಒಡೆದ ಮುತ್ತನು ಸುರಿದು

ಮಾತು ಮಾತಿಗೆ ಪೋಣಿಸಲು

ಹುರಿದುಂಬಿದ ಮನೆಯಲಿ

ಹನಿ ನೀರಿಗೂ ಬರಗಾಲ

ಕರಿಮಣಿಯ ಕಿತ್ತೊಗೆದ ಮಧುಮಗಳ ಬಾಳು

ಎಣ್ಣೆ ಇಲ್ಲದ ದೀಪವು ಬರ ಬರನೆ ಉರಿದು

ಮನಸ್ಸಿಲ್ಲ ಮಂಚದಲಿ ಮಲ್ಲಿಗೆಯ ಹಾಸಿ

ಕರಗುವ ಮುತ್ತು ಒಂದೆಡೆ ಸೇರಿ

ಕಣ್ಣಂಚಿನ ಕಾಡಿಗೆಗೆ ಧಗಧಗಿಸಿ

ತನ್ನಾವರಿಸಿದ ಸೆಳೆಯು ಮೊನಚುಗೊಂಡು

ಊರ ಸುತ್ತಲೊರಟ ಮನವು ಹಿಂತಿರುಗಿ ಬರುವುದೆಂದು

ಸೂರಿನಡಿ ನುಡಿಯುತಿದೆ ಶಕುನದ ಹಕ್ಕಿ

Monday, 1 March 2010

ಮಿಣಕು ಬಳ್ಳಿಯ ಸುಳಿಯಲ್ಲಿ


ಕವಿದ ಕಾರ್ಮೂಡಗಳು
ಪ್ರತಿದ್ವನಿಸಿದ  ಗುಡುಗು ಮಿಂಚು
ತಳಮಳಗೊಂಡ ತಪ್ಪಿಗೆ
ಬಂಧಿಯಾದೆ

ಸೊಬಗಿನ  ಕಡಲ ಕಿನಾರೆಯು
ಆರ್ಭಟಿಸಿ ಬಂದಪ್ಪಳಿಸಿದ
ರಭಸಕೆ ಎಣಿಕೆಗೆಸಿಗದಷ್ಟು
ವಸಂತ ಕಳೆದಿವೆ

ಒಡದಾಳದಲಿ ಮೂಡಿದ  ಬೆಳಕು
ಬಾಹ್ಯದಲಿ ಬೀಸುತಿರುವ ತಂಗಾಳಿ
ಬಳ್ಳಿಯಂತೆ ಚಿಗುರಿದ ಕನಸು
ಆಸರೆಯ ಬೇಡುತಿದೆ