ಜಗವೆಲ್ಲ ತುಂಬಿಹುವುದು
ನಡೆಸುವ ನಾವಿಕನಿಲ್ಲ
ಓಡುತಿವುದು ಬಂಡಿ
ಚಿದ್ರಗೊಂಡ ರಭಸಕೆ.
ನೀ ಕರುಣಿಸಿದ ಜನರೆ
ಅಗೆ ಅಗೆದು
ಬಗೆ ಬಗೆದು
ನಿನ್ನೊಡಲ ಕಣ ಕಣವನು
ಕಿತ್ತು ತಿನ್ನುತಿಹರು
ನಿಂತು ಬಿಡು ಒಮ್ಮೆ
ನಶಿಸಿ ಹೋಗಲಿ ಮನುಕುಲವೆಲ್ಲ
ಅಲ್ಲಿ,
ಕಾಡು ಮೇಡುಗಳು ಉಗಮಿಸಲಿ
ದಾರಿ ದಾರಿಯೆ ಕಣ್ಮರೆಯಾಗಲಿ
ಅವನಳಿಸಿದ ಪ್ರಾಣಿ ಪಕ್ಷಿ ಸಂಕುಲಗಳೆಲ್ಲ
ಮರು ಹುಟ್ಟಿ ಸಂಭ್ರಮಿಸಲಿ.
Saturday, 28 August 2010
Tuesday, 17 August 2010
ಮಮತೆಯ ಮರೆತವರು
Saturday, 7 August 2010
ದುಗುಡದ ಮನ
ಜೋಡಿ ಎತ್ತುಗಳು ದುರುಗುಟ್ಟಿ ನೋಡುತಿವೆ
ನಾ ಹೇಗೆ ತಿಳಿಯಲಿ
ಅವು ನನ್ನ ತಿವಿಯುವುದಿಲ್ಲವೆಂದು ?
ಜೋಡಿ ಹಕ್ಕಿಗಳೆರಡು
ಗೂಡು ಬಿಟ್ಟು ಹಾರುತಿವೆ
ನಾ ಹೇಗೆ ತಿಳಿಯಲಿ
ಅವು ಮತ್ತೆ ಗೂಡು ಸೇರುತ್ತೇವೆಂದು ?
ಕಾಣದ ಕೈಗಳೆರಡು
ಕತ್ತು ಹಿಸುಕುತ್ತಿವೆ
ನಾ ಹೇಗೆ ತಿಳಿಯಲಿ
ನಾ ಮತ್ತೆ ಬದುಕುತ್ತೇನೆಂದು ?
ದುಗುಡದ ಮನವೆ ದೂರವಾಗು ನನ್ನಿಂದ
ದೃಡನಾಗುವೆ ನಾ ಮಸಣದಲ್ಲೂ............
Saturday, 31 July 2010
ಕೆಂಪು ಕುಂಚ
ನಿನ್ನ ದ್ಯೇಯಗಳ ನಿರ್ಣಯ
ಪರರ ಏಳಿಗೆಗೆ ಮೀಸಲಿರಿಸಿದೆ.
ಸರ್ವಧರ್ಮ
ಸಮಾಭಾವವೆಂದು ತಿಳಿದು
ನ್ಯಾಯ ವಿಚಾರ,
ಅಭಿವ್ಯಕ್ತಿ ನಂಬಿಕೆ ಇಟ್ಟು
ಊಟ, ಉಡುಪು, ಆಚಾರ,
ಭಾಷೆಗಳನ್ನು ಮೈಗೂಡಿಸಿಕೊಂಡು
ದೇಶವನು ಸುಭದ್ರಗೊಳಿಸಲೊರಡುವ
ಸಮಯಕೆ
ದೊರೆಯ ದಬ್ಬಾಳಿಕೆಗೆ ಸಿಲುಕಿ ಸೊರಗಿದೆ
ಹಸಿದು ಒಣಗಿದ ಜನರು ಕಾಯುತಿಹರು
ಏಳು, ಎದ್ದೇಳು
ನಿನ್ನ ಲೇಖನಿಯಲಿ ಶಿರವ ಚಂಡಾದಿ
ಹೋರಾಟದ ಹಾದಿಗೆ ಮುನ್ನುಡಿಯಿಡು.
ಪರರ ಏಳಿಗೆಗೆ ಮೀಸಲಿರಿಸಿದೆ.
ಸರ್ವಧರ್ಮ
ಸಮಾಭಾವವೆಂದು ತಿಳಿದು
ನ್ಯಾಯ ವಿಚಾರ,
ಅಭಿವ್ಯಕ್ತಿ ನಂಬಿಕೆ ಇಟ್ಟು
ಊಟ, ಉಡುಪು, ಆಚಾರ,
ಭಾಷೆಗಳನ್ನು ಮೈಗೂಡಿಸಿಕೊಂಡು
ದೇಶವನು ಸುಭದ್ರಗೊಳಿಸಲೊರಡುವ
ಸಮಯಕೆ
ದೊರೆಯ ದಬ್ಬಾಳಿಕೆಗೆ ಸಿಲುಕಿ ಸೊರಗಿದೆ
ಹಸಿದು ಒಣಗಿದ ಜನರು ಕಾಯುತಿಹರು
ಏಳು, ಎದ್ದೇಳು
ನಿನ್ನ ಲೇಖನಿಯಲಿ ಶಿರವ ಚಂಡಾದಿ
ಹೋರಾಟದ ಹಾದಿಗೆ ಮುನ್ನುಡಿಯಿಡು.
Saturday, 24 July 2010
ತಣಿಸು ಜೀವಾತ್ಮವ
ಸನಿಹವಾದಾಗ
ಮಾತು
ಹೊರಹೊಮ್ಮಿ
ಮನ್ನಿಸು ಎನ್ನುವಷ್ಟರಲ್ಲಿ
ನನಗಾದ ನೋವು
ನಿನ್ನದಲ್ಲವೆನ್ನುತ
ಮರು ಮಾತಾಡದೆ
ಬಾನಾಡಿಗಳ ದಣಿವಿನ ದಾಹವ ತೀರಿಸಿ
ಮರೆಯಾದಳು
Subscribe to:
Posts (Atom)



