Sunday, 5 August 2012

ಓ ದೊರೆಯೆ

ಅಜ್ಜ ಇಟ್ಟ ರಾಗಿಯ 

ಭೂ ತಾಯಿಗೆ ಉಣಿಸಿ

ಜಟ್ಟಿಯಾಗಿದ್ದೇನೆ

ನೀನು ಕೊಡುವ ಕಾಳು ಕಡ್ಡಿಯ 

ಬೆಳೆದು 

ಶರಣಾಗಲಾರೆ

ಅದ ತಿಂದು 

ನಾ 

                                                 ನಪು:ಸಕನಾಗಲಾರೆ

Monday, 2 January 2012

ದಕ್ಕೆಯಾದ ಭಾವನೆಗಳಿಗೆ

ದಕ್ಕಲಿ

ಸುಮಧುರ ದಿನಗಳು

ಕಳಚದಿರಲಿ ಬಾಂಧವ್ಯದ ಬೆಸುಗೆಗಳು

ನವ ಚೈತನ್ಯ ತುಂಬುವ 

ಹೊಸ ವರ್ಷದ ಸಂಭ್ರಮ

ಹರುಷವ ತರಲಿ

ವರುಷವೆಲ್ಲ ಇರಲಿ

Thursday, 17 November 2011

ಯುದ್ದ ಎಂದರೆ 

ನಾವು 

ಹಿಗ್ಗಿವುದು ಅಲ್ಲ

ಕುಗ್ಗುವುದು ಅಲ್ಲ

ಸ್ಥೈರ್ಯ ಹೆಚ್ಚಿಸಿಕೊಳ್ಳುವುದು 

ಅಲ್ಲ 

ಅಂಧಕಾರದಲ್ಲಿ ಭುಗಿಲೆದ್ದ 

ಕ್ರೌರ್ಯ

Thursday, 17 March 2011

ಬೆಳ್ಳಿ ಬಂಗಾರ

ಆಗೊಂದು ಹೀಗೊಂದು ರೂಪ

ಕುಲುಮೆಯಲಿ

ಅಕ್ಕಸಾಲಿಗ ಉಳ್ಳವರಿಗೆ


ಮಡಿಕೆ ಕುಡಿಕೆಯ ಗಡಿಗೆ

ಸುಟ್ಟರೂ ಗುರಿಯೊಂದು

ತಣ್ಣಗಿರುವುದು

ಕುಂಬಾರ ದಣಿದ ದನಿಕನಿಗೆ
 
 

Saturday, 18 December 2010

ಉರಿ ಬಿಸಲಲಿ 


ಸುಡು ಕೆಂಡವ ಹೆಕ್ಕಿ


ಒಡಲ ಮಡಿಲಿಗೆ ತುಂಬಿಕೊಂಡು


ಭುವಿಯ ಧಗೆ ಸಣ್ಣದಾಗಿಸಲು 


ನಾನು ಪಾತ್ರದಾರಿಯಾಗಿರುವೆ.