ಭುವಿಯೆಲ್ಲ ಗೆರೆಗಳು
ತಿರುಗುತ್ತಿಲ್ಲ ಹುಟ್ಟು ಸಾವುಗಳನು ಹೊತ್ತು
ಭಾರವಾದ ಉಸಿರು
ಇನ್ನೇನು ಮುಗಿದೇ ಹೋಯಿತೆನ್ನುವಷ್ಟರಲ್ಲಿ
ಕಣ್ಣುಗಳಲ್ಲೇ ಇಡೀ ಬೆಳಕನ್ನು ತುಂಬಿಕೊಂಡು
ನನ್ನೆಡೆಗೆ ನೋಡಿದ ಹೊಳಪು
ಹೇಗೋ ನೆರಳುಗಳ ಸೀಳಿಕೊಂಡು
ನನ್ನಲ್ಲೆಲ್ಲ ಪ್ರವಹಿಸಿ
ಪುಳಕ, ತೆನೆ ತೂಗಿದಂತೆ ಹಗುರ
ಚಲನೆ ಶುರುವಾಯಿತು
ನೆಲಬೇರುಗಳಿಗೆ ಮತ್ತೆ ಚಿಗುರು.
(ಮಂಜುನಾಥ.ಎಸ್)
No comments:
Post a Comment