ಹಸಿವಿಗೆ ಅಲೆದ
ಇರುವೆಗಳು
ಬೆಲ್ಲವಿಟ್ಟಾಗ ಬರದೆ
ಬೇವಿಟ್ಟಾಗ ಮುತ್ತಿಕೊಂಡವು
ಆಗಸಕ್ಕೆ ರೆಕ್ಕೆ
ಚಿಗುರು ನೀನಲ್ಲ
ಮಳೆಯು ನಾನಲ್ಲ
ಉದುರಿದ ತರಗಲೆಗಳು
ಚಿಗುರೋಡೆಯಲು ತವಕಿಸುತ್ತಿವೆ
ಕರಗುವ ಮುನ್ನ
ಮನವು ಹಗುರಾಗಲೆಂದು
ಅಧಿಕಾರಶಾಹಿ
ಹಣ್ಣಾದ ಎಲೆಗಳು
ಉದುರಿದಾಗ
ಚಿಗುರೆಲೆಯ ನೋಡಿ
ಮರಕೆ ಕೊಡಲಿ ಇಟ್ಟವು
Liquid beef
ಗೋ ಹತ್ಯೆ ನಿಷೇಧವನ್ನು
ಪ್ರಸ್ತಾಪಿಸಿದಾಗ
ತನ್ನ ಕರುವು
ಕೆಚ್ಚಲನ್ನು ಹೀರಿಕೊಂಡು
ಜಾರಿಗೆ ತಂದಿತು.
3 comments:
ಒಂದು ಉತ್ತಮವಾದ ವಿಮರ್ಶೆ ಪದ್ಯ ರೂಪ ಪಡೆದಿರುವುದು ಕವಿಗಿರುವ ವಾಸ್ತವಿಕ ಪ್ರಜ್ಞೆಗೆ ಸಾಕ್ಷಿ. ತಿಳಿ ಹನಿಯಲ್ಲಿ ಇತ್ತೀಚಿಗೆ ಹೊಸ ಬೆಳಕು ಪ್ರವಹಿಸುತ್ತಿರುವುದು ಹೊಸ ನೋಟಕ್ಕೆ ನಾಂದಿ.
manju
ಎಲ್ಲಾರ ಜೀವನದಲ್ಲಿ ನಡೆಯುತ್ತಿರುವ ಒಂದು ವಿಷಯವಿದು, ಒಳ್ಳೆಯದನ್ನು ಕಲಿಯಲು ಬರದೆ ಇರುವ ಮನುಷ್ಯರು ಬೇವಿನಂಥಹ ಕಹಿಯ ವಿಷಯವನ್ನು ಕಲಿಯಲು ಮಾತ್ರ ಬಹು ಬೇಗನೆ ಸೇರಿ/ಮುತ್ತಿ ಕೊಳ್ಳುವರು.
ಮರ್ಸಿ ಮೇಡಂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
Post a Comment