Sunday, 10 February 2013
Friday, 24 September 2010
ಇಳೆಗೆ ಚಿಗುರು
ಮಲ್ಲಿಗೆಯ ಬಳ್ಳಿಯ ತವಕ
ರಂಬೆ ಕೊಂಬೆಗಳನು ಸುತ್ತಿ
ಕಣ್ತೆರೆದು
ಅಣಕಿಸುವ ಬೆಳಕಿಗೆ ಬೆಳಕನು
ಆಸರೆಗೆ ತಂಪನು ನೀಡುತ
ಮುಡಿಯನೇರಿ ಸೂಸಿ
ತಾ ಪಡೆದ ಕ್ಷಣದ ಸುಖದಿ
ಕೆಚ್ಚಲ ಹಾಲು ತುಂಬಿ
ಕರುಳ ಬಳ್ಳಿಯು
ಹೊರ ಬರಲು ತವಕಿಸುತ್ತಿದೆ
ರಂಬೆ ಕೊಂಬೆಗಳನು ಸುತ್ತಿ
ಕಣ್ತೆರೆದು
ಅಣಕಿಸುವ ಬೆಳಕಿಗೆ ಬೆಳಕನು
ಆಸರೆಗೆ ತಂಪನು ನೀಡುತ
ಮುಡಿಯನೇರಿ ಸೂಸಿ
ತಾ ಪಡೆದ ಕ್ಷಣದ ಸುಖದಿ
ಕೆಚ್ಚಲ ಹಾಲು ತುಂಬಿ
ಕರುಳ ಬಳ್ಳಿಯು
ಹೊರ ಬರಲು ತವಕಿಸುತ್ತಿದೆ
Friday, 17 September 2010
ರಕ್ಕೆ ಹೂವು-ನಗೆ ಬುಗ್ಗೆ
ರಕ್ಕೆ ಹೂವು
ನನ್ನವಳ ಸೆಳೆತಕೆ ಸಿಕ್ಕಾಗ
ನನ್ನುಸಿರ ಬಸಿದು ನೀರೆರದೆ
ತನು ತುಂಬಿ ಅರಳಿ
ದುಂಬಿಯ ಸೆಳತಕೆ ಮರುಳಾಗಿ
ಹಾರಿಹೋದಳು
ನಗೆ ಬುಗ್ಗೆ
ಕಲ್ಪನೆಗೂ ಸಿಗದೆ
ಮರೆಯಾಗುತ್ತಿದ್ದ ತೊರೆಯು
ನಿನ್ನ ನಗುವಿಗೆ
ದುಮ್ಮುಕ್ಕಿ ಹರಿಯಿತು.
ನನ್ನವಳ ಸೆಳೆತಕೆ ಸಿಕ್ಕಾಗ
ನನ್ನುಸಿರ ಬಸಿದು ನೀರೆರದೆ
ತನು ತುಂಬಿ ಅರಳಿ
ದುಂಬಿಯ ಸೆಳತಕೆ ಮರುಳಾಗಿ
ಹಾರಿಹೋದಳು
ನಗೆ ಬುಗ್ಗೆ
ಕಲ್ಪನೆಗೂ ಸಿಗದೆ
ಮರೆಯಾಗುತ್ತಿದ್ದ ತೊರೆಯು
ನಿನ್ನ ನಗುವಿಗೆ
ದುಮ್ಮುಕ್ಕಿ ಹರಿಯಿತು.
Monday, 13 September 2010
ಬುಡಬುಡಕೆ
Saturday, 4 September 2010
ನಿಶಬ್ಧ ಬೆಳಕು
ನನ್ನ ಒಲವನು
ಒಡೆದ ಮಡಿಕೆ ಎಂದರು.
ನೆರೆ ಮನೆಯಲಿ
ಮೊಟ್ಟೆ ಇಟ್ಟ ಹಕ್ಕಿ ಎಂದರು.
ಹಣ್ಣಿಲ್ಲದ ಮರದಂತೆ
ನೀ.. ಬಂಜೆ ಎಂದರೂ...
ನೆರಳಿನ
ಮಧುರ ಪ್ರೀತಿ
ಮರೆಯಾಗುವುದೆ ?
ಒಡೆದ ಮಡಿಕೆ ಎಂದರು.
ನೆರೆ ಮನೆಯಲಿ
ಮೊಟ್ಟೆ ಇಟ್ಟ ಹಕ್ಕಿ ಎಂದರು.
ಹಣ್ಣಿಲ್ಲದ ಮರದಂತೆ
ನೀ.. ಬಂಜೆ ಎಂದರೂ...
ನೆರಳಿನ
ಮಧುರ ಪ್ರೀತಿ
ಮರೆಯಾಗುವುದೆ ?
Saturday, 28 August 2010
ಭುವಿಯ ಒಡಲ ಕೂಗು
ಜಗವೆಲ್ಲ ತುಂಬಿಹುವುದು
ನಡೆಸುವ ನಾವಿಕನಿಲ್ಲ
ಓಡುತಿವುದು ಬಂಡಿ
ಚಿದ್ರಗೊಂಡ ರಭಸಕೆ.
ನೀ ಕರುಣಿಸಿದ ಜನರೆ
ಅಗೆ ಅಗೆದು
ಬಗೆ ಬಗೆದು
ನಿನ್ನೊಡಲ ಕಣ ಕಣವನು
ಕಿತ್ತು ತಿನ್ನುತಿಹರು
ನಿಂತು ಬಿಡು ಒಮ್ಮೆ
ನಶಿಸಿ ಹೋಗಲಿ ಮನುಕುಲವೆಲ್ಲ
ಅಲ್ಲಿ,
ಕಾಡು ಮೇಡುಗಳು ಉಗಮಿಸಲಿ
ದಾರಿ ದಾರಿಯೆ ಕಣ್ಮರೆಯಾಗಲಿ
ಅವನಳಿಸಿದ ಪ್ರಾಣಿ ಪಕ್ಷಿ ಸಂಕುಲಗಳೆಲ್ಲ
ಮರು ಹುಟ್ಟಿ ಸಂಭ್ರಮಿಸಲಿ.
ನಡೆಸುವ ನಾವಿಕನಿಲ್ಲ
ಓಡುತಿವುದು ಬಂಡಿ
ಚಿದ್ರಗೊಂಡ ರಭಸಕೆ.
ನೀ ಕರುಣಿಸಿದ ಜನರೆ
ಅಗೆ ಅಗೆದು
ಬಗೆ ಬಗೆದು
ನಿನ್ನೊಡಲ ಕಣ ಕಣವನು
ಕಿತ್ತು ತಿನ್ನುತಿಹರು
ನಿಂತು ಬಿಡು ಒಮ್ಮೆ
ನಶಿಸಿ ಹೋಗಲಿ ಮನುಕುಲವೆಲ್ಲ
ಅಲ್ಲಿ,
ಕಾಡು ಮೇಡುಗಳು ಉಗಮಿಸಲಿ
ದಾರಿ ದಾರಿಯೆ ಕಣ್ಮರೆಯಾಗಲಿ
ಅವನಳಿಸಿದ ಪ್ರಾಣಿ ಪಕ್ಷಿ ಸಂಕುಲಗಳೆಲ್ಲ
ಮರು ಹುಟ್ಟಿ ಸಂಭ್ರಮಿಸಲಿ.
Tuesday, 17 August 2010
ಮಮತೆಯ ಮರೆತವರು
Saturday, 7 August 2010
ದುಗುಡದ ಮನ
ಜೋಡಿ ಎತ್ತುಗಳು ದುರುಗುಟ್ಟಿ ನೋಡುತಿವೆ
ನಾ ಹೇಗೆ ತಿಳಿಯಲಿ
ಅವು ನನ್ನ ತಿವಿಯುವುದಿಲ್ಲವೆಂದು ?
ಜೋಡಿ ಹಕ್ಕಿಗಳೆರಡು
ಗೂಡು ಬಿಟ್ಟು ಹಾರುತಿವೆ
ನಾ ಹೇಗೆ ತಿಳಿಯಲಿ
ಅವು ಮತ್ತೆ ಗೂಡು ಸೇರುತ್ತೇವೆಂದು ?
ಕಾಣದ ಕೈಗಳೆರಡು
ಕತ್ತು ಹಿಸುಕುತ್ತಿವೆ
ನಾ ಹೇಗೆ ತಿಳಿಯಲಿ
ನಾ ಮತ್ತೆ ಬದುಕುತ್ತೇನೆಂದು ?
ದುಗುಡದ ಮನವೆ ದೂರವಾಗು ನನ್ನಿಂದ
ದೃಡನಾಗುವೆ ನಾ ಮಸಣದಲ್ಲೂ............
Saturday, 31 July 2010
ಕೆಂಪು ಕುಂಚ
ನಿನ್ನ ದ್ಯೇಯಗಳ ನಿರ್ಣಯ
ಪರರ ಏಳಿಗೆಗೆ ಮೀಸಲಿರಿಸಿದೆ.
ಸರ್ವಧರ್ಮ
ಸಮಾಭಾವವೆಂದು ತಿಳಿದು
ನ್ಯಾಯ ವಿಚಾರ,
ಅಭಿವ್ಯಕ್ತಿ ನಂಬಿಕೆ ಇಟ್ಟು
ಊಟ, ಉಡುಪು, ಆಚಾರ,
ಭಾಷೆಗಳನ್ನು ಮೈಗೂಡಿಸಿಕೊಂಡು
ದೇಶವನು ಸುಭದ್ರಗೊಳಿಸಲೊರಡುವ
ಸಮಯಕೆ
ದೊರೆಯ ದಬ್ಬಾಳಿಕೆಗೆ ಸಿಲುಕಿ ಸೊರಗಿದೆ
ಹಸಿದು ಒಣಗಿದ ಜನರು ಕಾಯುತಿಹರು
ಏಳು, ಎದ್ದೇಳು
ನಿನ್ನ ಲೇಖನಿಯಲಿ ಶಿರವ ಚಂಡಾದಿ
ಹೋರಾಟದ ಹಾದಿಗೆ ಮುನ್ನುಡಿಯಿಡು.
ಪರರ ಏಳಿಗೆಗೆ ಮೀಸಲಿರಿಸಿದೆ.
ಸರ್ವಧರ್ಮ
ಸಮಾಭಾವವೆಂದು ತಿಳಿದು
ನ್ಯಾಯ ವಿಚಾರ,
ಅಭಿವ್ಯಕ್ತಿ ನಂಬಿಕೆ ಇಟ್ಟು
ಊಟ, ಉಡುಪು, ಆಚಾರ,
ಭಾಷೆಗಳನ್ನು ಮೈಗೂಡಿಸಿಕೊಂಡು
ದೇಶವನು ಸುಭದ್ರಗೊಳಿಸಲೊರಡುವ
ಸಮಯಕೆ
ದೊರೆಯ ದಬ್ಬಾಳಿಕೆಗೆ ಸಿಲುಕಿ ಸೊರಗಿದೆ
ಹಸಿದು ಒಣಗಿದ ಜನರು ಕಾಯುತಿಹರು
ಏಳು, ಎದ್ದೇಳು
ನಿನ್ನ ಲೇಖನಿಯಲಿ ಶಿರವ ಚಂಡಾದಿ
ಹೋರಾಟದ ಹಾದಿಗೆ ಮುನ್ನುಡಿಯಿಡು.
Saturday, 24 July 2010
ತಣಿಸು ಜೀವಾತ್ಮವ
ಸನಿಹವಾದಾಗ
ಮಾತು
ಹೊರಹೊಮ್ಮಿ
ಮನ್ನಿಸು ಎನ್ನುವಷ್ಟರಲ್ಲಿ
ನನಗಾದ ನೋವು
ನಿನ್ನದಲ್ಲವೆನ್ನುತ
ಮರು ಮಾತಾಡದೆ
ಬಾನಾಡಿಗಳ ದಣಿವಿನ ದಾಹವ ತೀರಿಸಿ
ಮರೆಯಾದಳು
Saturday, 17 July 2010
ಪಟ್ಟ ಭದ್ರ
Friday, 9 July 2010
ಕೆಡವಿ ತಾರತಮ್ಯವ
ಜಾತಿ ಮತದ
ವಿಷ ಬೀಜ
ಆಂತರ್ಯಕ್ಕೆ ಬಿತ್ತಿ
ರಾಜ್ಯ ಕಟ್ಟಿ
ಅರಸನಾಗಿ ಆಳಿದವನು
ಕೋಮು ಗಲಭೆಯ
ಕಳೆಯೊಳಗೆ ಸಿಲುಕಿ
ಕಾಲವಾದಾಗ
ಊರೂರ ಹಸಿರು ಸಿರಿಯಾಡುವುದು.
ವಿಷ ಬೀಜ
ಆಂತರ್ಯಕ್ಕೆ ಬಿತ್ತಿ
ರಾಜ್ಯ ಕಟ್ಟಿ
ಅರಸನಾಗಿ ಆಳಿದವನು
ಕೋಮು ಗಲಭೆಯ
ಕಳೆಯೊಳಗೆ ಸಿಲುಕಿ
ಕಾಲವಾದಾಗ
ಊರೂರ ಹಸಿರು ಸಿರಿಯಾಡುವುದು.
Saturday, 26 June 2010
ಬಿಚ್ಚೋಲೆ
Saturday, 19 June 2010
ಮಣ್ಣೆಂಟೆಯೊಳು ತೆನೆ ಪೈರು
ಬಡತನದ ದೀವಿಗೆಯ ಹೊತ್ತು
ಕಾಮ ಕ್ರೋಧವನು ಕತ್ತಲೆಗೆ ದೂಡಿ
ಪೂಜೆ ಪುನಸ್ಕಾರವನು ಬದಿಗೊತ್ತಿ
ಬಿಸಿಲ ಧೂಳಲಿ ಕರೆ ಕಾಳ ಬಿತ್ತಲು
ಕುರಿಕೆಯ ಹಿಡಿದು ಹೊರಟ ಹಸಿ ಮೈ
ಜಡಿ ಮಳೆಗೆ ಬೆವರು ಸುರಿಸಿ,
ಮಣ್ಣೆಂಟೆ ಕಳೆಗಳನು ಬಡಿದು
ಬಡ ಬಗ್ಗರ ಬದುಕ ಕಟ್ಟಿ
ಮೊಳಕೆಯೊಡೆವ ಮೊದಲೆ
ತನ್ನಾಳುವ ಅರಸನ ಕೈಗೆ ಸಿಕ್ಕು
ಮೇಣಿಯ ಹಾಲನು ಕುಡಿದು
ನೇಗಿಲ ಯೋಗಿಯಾಗಿರುವೆ.
ಕಾಮ ಕ್ರೋಧವನು ಕತ್ತಲೆಗೆ ದೂಡಿ
ಪೂಜೆ ಪುನಸ್ಕಾರವನು ಬದಿಗೊತ್ತಿ
ಬಿಸಿಲ ಧೂಳಲಿ ಕರೆ ಕಾಳ ಬಿತ್ತಲು
ಕುರಿಕೆಯ ಹಿಡಿದು ಹೊರಟ ಹಸಿ ಮೈ
ಜಡಿ ಮಳೆಗೆ ಬೆವರು ಸುರಿಸಿ,
ಮಣ್ಣೆಂಟೆ ಕಳೆಗಳನು ಬಡಿದು
ಬಡ ಬಗ್ಗರ ಬದುಕ ಕಟ್ಟಿ
ಮೊಳಕೆಯೊಡೆವ ಮೊದಲೆ
ತನ್ನಾಳುವ ಅರಸನ ಕೈಗೆ ಸಿಕ್ಕು
ಮೇಣಿಯ ಹಾಲನು ಕುಡಿದು
ನೇಗಿಲ ಯೋಗಿಯಾಗಿರುವೆ.
Friday, 11 June 2010
ಕಾಲವನ್ನು ಸರಿಸಿ
ಕರಗಿದ ಮುತ್ತು
ಒಗ್ಗೂಡಿ
ಮರು ಹುಟ್ಟು.
ನೋವು ಹುದುಗಿಸಿಟ್ಟು
ಅವಳಿಗಾಗಿ ಕಾಯುವ ಕಾಲ
ನನ್ನ ಮುಂದೆ ನಶ್ವರ
Subscribe to:
Posts (Atom)
















